ವಿಶ್ವನಾಥ ನಾಯಕ ಬಿ.ಎ. ಮುಗಿಯುತ್ತಿದ್ದಂತೆ ಎಂ.ಎ. ವ್ಯಾಸಂಗ ಮಾಡಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಅವನ ಮೂಲಕವೇ ನನಗೆ ವಿಶ್ವವಿದ್ಯಾಲಯ ಮತ್ತು ಎಂ.ಎ ವ್ಯಾಸಂಗದ ಕುರಿತು ಅಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ದೊರೆಯುವ ಹಾಸ್ಟೆಲ್ ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳ ಕುರಿತು ಮಾಹಿತಿ ದೊರೆಯಿತು. ಮತ್ತು ನನ್ನ ಎಂ.ಎ ಓದಿನ ಆಸೆಯೂ ಜಾಗೃತವಾಯಿತು